ಗೊತ್ತುಗುರಿಯ ಘೋಷಣೆ
 

ನಮ್ಮ ಎಲ್ಲ ಗ್ರ್ರಾಹಕರ ಜೀವನಮಟ್ಟ ಸುಧಾರಣೆಯಲ್ಲಿ ಪಾಲುದಾರನಾಗುವುದು ಮತ್ತು ರಾಜ್ಯ ಹಾಗೂ ದೇಶದಲ್ಲಿ ಪ್ರಮುಖ ಮತ್ತು ಪ್ರಬಲ ಗ್ರ್ರಾಮೀಣ ಬ್ಯಾಂಕ್ ಆಗಿ ಬೆಳೆಯುವುದು ನಮ್ಮ ಗುರಿ.

ನಮ್ಮ ಗ್ರಾಹಕರ ಹಾರೈಕೆ ಮತ್ತು ಆಶೋತ್ತರಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವುದು ಮತ್ತು ಅವರ ನಿರೀಕ್ಷೆಗೂ ಮೀರಿ ಹಸನ್ಮುಖರಾಗಿ ಅವರಿಗೆ ಸೇವೆ ಸಲ್ಲಿಸುವುದು ನಮ್ಮ ಧ್ಯೇಯ.

 
ಪರಂಪರೆ
 
 
ಈ ಬ್ಯಾಂಕ್ ಮಹಾನ್ ಎಂಜಿನಿಯರ್ ಮತ್ತು ಮುತ್ಸದ್ದಿ ದಿವಂಗತ ಸರ್.ಎಂ.ವಿಶ್ವೇಶ್ವರಯ್ಯ ಅವರ ಮುಂದಾಳತ್ವದ ಬ್ಯಾಂಕಿಂಗ್ ಸಮಿತಿಯ ಸೂಚನೆಯ ಮೇರೆಗೆ ೧೯೧೩ರಲ್ಲಿ ಸ್ಥಾಪಿತವಾದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಿಂದ ಪ್ರಾಯೋಜಿತವಾಗಿದೆ.
 
     
 
ಎರಡು ವರ್ಗಾವಣೆದಾರ ಬ್ಯಾಂಕುಗಳು ಅಂದರೆ ಕಾವೇರಿ ಗ್ರಾಮೀಣ ಬ್ಯಾಂಕ್ ಅಕ್ಟೋಬರ್ ೦೨, ೧೯೭೬ರಂದು ಮತ್ತು ಕಲ್ಪತರು ಗ್ರಾಮೀಣ ಬ್ಯಾಂಕ್ ಮಾರ್ಚ್ ೩೧, ೧೯೮೨ರಂದು ಸ್ಥಾಪಿತವಾಯಿತು. ತಲಾ ಮೂರು ಜಿಲ್ಲೆಗಳಲ್ಲಿ ವ್ಯಾಪಿಸಿರುವ ತಮ್ಮತಮ್ಮ ಕಾರ್ಯಾಚರಣೆ ಕ್ಷೇತ್ರಗಳಲ್ಲಿ ಪ್ರತಿಯೊಂದೂ ಮನೆಮಾತಾಗಿವೆ.
 
     
 
ಎರಡು ಬ್ಯಾಂಕುಗಳು ಕೆಳಕಂಡಂತೆ ತಮ್ಮ ಉತ್ತಮ ಸಾಧನೆಯಿಂದ ಖ್ಯಾತಿ ಪಡೆದಿವೆ:
 
     
 
 
ಕಾವೇರಿ ಗ್ರಾಮೀಣ ಬ್ಯಾಂಕ್ : ೧೯೯೯ರಿಂದ ೨೦೦೫ರವರೆಗಿನ ವರ್ಷಗಳಲ್ಲಿ ಅತ್ಯಧಿಕ ಸ್ವಸಹಾಯ ಸಂಘಗಳ ಕೂಡಿಕೆಗಾಗಿ ಕರ್ನಾಟಕದಲ್ಲಿ ಅತ್ಯುತ್ತಮ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಎಂದು ಪ್ರಶಸ್ತಿ ಗಳಿಸಿದೆ.
 
     
 
 
ಕಲ್ಪತರು ಗ್ರಾಮೀಣ ಬ್ಯಾಂಕ್ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಭಾಗಸ್ಥ ಬ್ಯಾಂಕುಗಳಿಂದ ಪ್ರಾಯೋಜಿತವಾದ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ “೨೦೦೫-೦೬ರಲ್ಲಿನ ಅತ್ಯುತ್ತಮ ಸಾಧನೆ”ಗಾಗಿ ಅತ್ಯುತ್ತಮ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಎಂದು ನಿರ್ಣಯಿತವಾಗಿದೆ. ೨೦೦೪-೦೫ರಲ್ಲಿ ಬ್ಯಾಂಕು ಅದೇ ವರ್ಗದಲ್ಲಿ ಎರಡನೆಯ ಬಹುಮಾನ ಪಡೆದಿದೆ.
 
     
 
 
ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್ ಕೆಳಕಂಡಂತೆ ವಿಶೇಷ ಮನ್ನಣೆ ಪಡೆದಿದೆ. ೨೦೦೬-೦೭ ಹಾಗೂ ೨೦೦೭-೦೮ರಲ್ಲಿ ರಾಜ್ಯಮಟ್ಟದಲ್ಲಿ ಬ್ಯಾಂಕ್ ಕೂಡಿಕೆ ಕಾರ್ಯಕ್ರಮದಲ್ಲಿ ಅತ್ಯುತ್ತಮ ಸಾಧನೆ, ನಾಲ್ಕು ಜಿಲ್ಲೆಗಳಲ್ಲಿ ಜಿಲ್ಲಾಮಟ್ಟದಲ್ಲಿ ಅತ್ಯುತ್ತಮ ಸಾಧನೆ. ಅವುಗಳೆಂದರೆ: ಮೈಸೂರು, ಹಾಸನ, ತುಮಕೂರು ಮತ್ತು ಚಾಮರಾಜನಗರ, ಬ್ಯಾಂಕಿನಿಂದ ರೈತರ ಕೂಟಗಳನ್ನು ಉತ್ತೇಜಿಸಲಾಗಿದೆ.
 
     
 
 
ಮುಖ ಪುಟ | ನಮ್ಮ ಬಗ್ಗೆ | ಸೇವಾ ವೆಚ್ಹಗಳು | ಸಂಪರ್ಕಿಸಿ |ನಿಮ್ಮ ಸಮೀಪದ ಶಾಖೆ | ಟೆಂಡರ್ | ಉದ್ಯೋಗ ಅವಕಾಶಗಳು | ರೈಟ್ ಟು ಇನ್ಫೊರ್ಮೇಶನ್ ಆಕ್ಟ್

ಬ್ಯಾಂಕಿಂಗ್ ಒಮ್ಬುಡ್ಸ್ಮನ್
| ದೂರು ವಿಭಾಗ | ಅಭಿಪ್ರಾಯ ಮತ್ತು ಅನಿಸಿಕೆಗಳು | ಸೈಟ್ ಮ್ಯಾಪ್
 
 
The content on this webpage is copyright© 2007 Cauvery Kalpatharu Grameena Bank, All rights reserved.
Website designed & Maintained by Arokia IT Pvt. Ltd, Bangalore